ಬದುಕಿನ ರಂಗಭೂಮಿಯಲಿ
ಮುಖವಾಡ ಅನಿವಾರ್ಯ...
ನಿನ್ನ ಪಾತ್ರ ಮುಗಿಯುವರೆಗೆ ಮಾತ್ರ...
ಮುಖವಾಡವೇ ಮುಖವಾದರೆ
ನಿಜ ಪಾತ್ರದಾರಿ ಮರೆಯಾಗುವನು..
ಸೂತ್ರದಾರಿಯೇ ಗುರುವಾಗುವನು..
ಕರಗುವ ಚಂದಿರ ಪೂರ್ಣನಾಗುವನು
ಅಮವಾಸ್ಯೆ ಕಳೆದು ಹುಣ್ಣಿಮೆಯಲಿ...
ಆದರೆ ಕರಗಿದ ಮನಸ್ಸು ದೃಢವಾಗುವುದೇ
ಬೆರಳೆಣಿಕೆಯ ದಿನಗಳಲಿ..
ಅಂದದ ಮನಸ್ಸಿಗಿಂತ ಆಭರಣವಿಲ್ಲ...
ಆದರೆ ನೀ ಆಭರಣದಂಗಡಿಯ ಮಾಲಿಕನಲ್ಲ
ಪ್ರತಿ ಬಾರಿ ಹೊಸದು ಕೊಳ್ಳಲಿಕ್ಕೆ....
ಆಭರಣವ ಜೋಪಾನವಿರಿಸು..
ಪ್ರೀತಿಯಿಂದ ಕೊಳ್ಳುವವರು ಸಿಕ್ಕಾರು...
ಸ್ನೇಹಿತರು,ಕುಲದವರು,ನಿನ್ನೂರಿನ ಕಡೆಯವರು
ಎಲ್ಲರೂ ಜೊತೆಗಿರುವರು ಬೆಳದಿಂಗಳೂಟಕೆ..
ನಿನ್ನಿಂದಾಗುವ ಕೆಲಸಕೆ...
ಬಾರದೆ ಇರಲು ಕಾರಣ ಕೊಡುವರು
ನಿನ್ನ ಕತ್ತಲ ಕೂಟಕೆ,
ನಿನ್ನ ನೋವಿನ ಮಂಟಪಕೆ ...
ನಿನಗೆ ತಿಳಿದಿರಲಿ ನೀ ಯಾರಿಗೂ ಕಡಿಮೆ ಏನಿಲ್ಲ
ಪ್ರತೀ ಬಾರಿ ಸೋತಾಗಲೂ ಎದ್ದು ನಿಲ್ಲಲ್ಲಿಕ್ಕೆ...
ಬದುಕ ವ್ಯಯಿಸಬೇಡ ಈ ಕ್ಷಣದ ಸುಖಕಾಗಿ
ಬದುಕು ನೀ ನಿನ್ನ ಬದುಕಿಸಿದ ತಾಯಿಗಾಗಿ..
ಬದುಕು ನೀ ನಿನ್ನ ಬೆಳೆಸಿದ ತಂದೆಗಾಗಿ..
ಬದುಕು ನೀ ನಿನ್ನ ರೂಪಿಸಿದ ಗುರುವಿಗಾಗಿ..
ಸತ್ಯಕ್ಕೆ ಸೋಲಿಲ್ಲ
ಸುಳ್ಳಿಗೆ ಜಯವಿಲ್ಲ
ಅವಕಾಶಕೆ ಕೊನೆಯಿಲ್ಲ
ಅಪವಾದವೇ ಕೊನೆಯಲ್ಲ
ಗೆಲುವೇ ಶಾಶ್ವತವಲ್ಲ
ಸೋಲೇ ಸಮಾಧಿಯಲ್ಲ
ಇದನ್ನರಿತರೆ ನೀ ಜಗತ್ತಿನಲ್ಲಿ
ಇಲ್ಲದಿದ್ದರೆ ಜಗತ್ತು ಇನ್ನೆಲ್ಲಿ..?





